ಹರಿಯೆ ನನ್ನ ಅರಿಯೆ

ಓ ಎನ್ನ ಎದೆಯಾಳದ ಹರಿಯೆ
ನೀನು ನನ್ನ ಭಾವಗಳ ಅರಿಯೆ
ನಾನು ಹೇಗಿದ್ದರೂ ಅದು ಸರಿಯೆ
ನಿನ್ನ ನೆನಪಲ್ಲೆ ಎಲ್ಲವೂ ಮರೆವೆ

ಯಾವುದು ಇಲ್ಲಿ ಸಾರ್ಥಕವಿಲ್ಲ
ಎಲ್ಲ ಕಾಲ ಗರ್ಭನಲ್ಲಿ ಕಳೆಯುತ್ತದೆ
ಕ್ಷಣ ಕ್ಷಣಕ್ಕೂ ತನ್ನನ್ನೆ ಕಳೆದುಕೊಂಡು
ಸಾವಿನ ಮಡಿಲಲ್ಲಿ ಸೇರಿ ಅಳಿಯುತ್ತದೆ

ಭವದ ಭೂಮಿಯಲ್ಲಿ ಆಸೆ ಮನೆ ಮಾಡಿ
ಆ ಆಸೆಗೆ ನೂರೆಂಟು ಬಿಟ್ಟಿವೆ ಬೇರು
ಯಾವ ಚರಣದಲ್ಲೂ ನಿರಾಶೆ ನೀಡಿ
ಸರಿಯುತ್ತವೆ ಆಗ ತಬ್ಬಲಿಮನ ಆಖೇರು

ಇನ್ನೂ ವಿಳಂಬವೇಕೆ ಏ ಮಾನವ
ಈಗಲೇ ರೂಪಿಸು ನಿನ್ನ ಈ ಬದುಕು
ಮೋಜು ಗೋಜುಗಳಲಿ ಕಳೆಯದಿರು ಜೋಕೆ
ಮಾಣಿಕ್ಯ ವಿಠಲನಾಗಿ ಬೇಡು ಬೆಳಕು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆಯು ಬಂದು
Next post ಪ್ರಗತಿ ಅಥವಾ ದಾಸ್ಯವಿಮೋಚನೆ – ೩ನೆಯ ಖಂಡ – ರೂಢಿಯ ಪರಿತ್ಯಾಗ

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

cheap jordans|wholesale air max|wholesale jordans|wholesale jewelry|wholesale jerseys